ಲಾಟರಿ ಹಗರಣ; ಅಲೋಕ್​ಕುಮಾರ್​ಗೆ ಸಿಬಿಐ ಕ್ಲೀನ್ ಚಿಟ್

ಬೆಂಗಳೂರು: ಒಂದಂಕಿ ಲಾಟರಿ ಹಗರಣದಲ್ಲಿ ಆರೋಪ ಎದುರಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಅಲೋಕ್​ಕುಮಾರ್​ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.

ಲಾಟರಿ ದಂಧೆ ನಡೆಸುತ್ತಿದ್ದ ಪಾರಿರಾಜನ್​ನಿಗೆ ಸಹಕರಿಸಿದ ಆರೋಪ ಅಲೋಕ್ ಕುಮಾರ್ ಮೇಲಿತ್ತು. ಪ್ರಕರಣ ಕುರಿತು ಸುಮಾರು 5 ವರ್ಷ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು, ಜ.22ರಂದು ತನಿಖಾ ವರದಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್​ಗೆ 60 ಪುಟಗಳ ಆರೋಪಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು, ಎಡಿಜಿಪಿ ಅಲೋಕ್​ಕುಮಾರ್ ಹಾಗೂ ಅಂದಿನ ರಾಜ್ಯ ಲಾಟರಿ ಮತ್ತು ಮದ್ಯ ನಿಷೇಧ ಘಟಕ ಎಸ್​ಪಿ ಧರಣೇಂದ್ರ ಅವರು ಲಾಟರಿ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂಬ ಬಗ್ಗೆ ಬೆಳಕು ಚೆಲ್ಲಿದೆ.

ಲಾಟರಿ ಪ್ರಕರಣದಲ್ಲಿ ಆರೋಪಮುಕ್ತರಾದ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್​ಕುಮಾರ್, ಪೊಲೀಸ್ ಇಲಾಖೆ ಮತ್ತು ಆಡಳಿತದಲ್ಲಿ ಇದ್ದವರ ಒಳಸಂಚಿಗೆ ಬಲಿಪಶು ಆಗಿದ್ದೆ. 5 ವರ್ಷಗಳ ಬಳಿಕ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದರು.

Related posts